Saturday, December 10, 2016

ಕವಿತೆ


ಬದುಕೊಂದು ಭಾವಗೀತೆ
ಭಾವನೆಗಳೇ ಬರಹಕೆ ಹಣತೆ
ಮುದದಿಂದ ಅರಳಲಿ ಕವಿತೆ
ಹರುಷದಿ ಸವಿಯಲು ಜನತೆ

ಸ್ವರ ಸಾಹಿತ್ಯದ ಸಮ್ಮಿಲನ
ಭಾವನೆಗಳ ಆಂದೋಲನ
ಕವಿಯ ಪಾಂಡಿತ್ಯದ ಹೂರಣ
ಕವಿತೆಯ ರೂಪದಿ ಅನಾವರಣ

ಹರುಷವಿರಲಿ ವಿರಹವಿರಲಿ
ಧುಮ್ಮಿಕ್ಕುವುದು ಬರಹದಲಿ
ಕವಿ ಕಂಡನು ತನ್ನ ಕಣ್ಣಲಿ
ನಿರೂಪಿಸಿದನು ಲೇಖನಿಯಲಿ

ಜನನ ಮರಣದ ಪಯಣದಿ
ಭಾವನೆಗಳು ಹರಿವುದು ಬರಹದಿ
ಕವನವದು ಆವಿರ್ಭವಿಸಿತು 
ಮುಖ್ಯಪ್ರಾಣನ ನಿನ್ನ ದಯೆ ಇರಲಿ


-ಗುರು

No comments:

Post a Comment