Saturday, August 5, 2023

ವಿಷ್ಣುಸಹಸ್ರನಾಮ

ವಾಸುದೇವನ ಸಾವಿರ ನಾಮವ ಬನ್ನಿ ಭಜಿಸುವ ಜೊತೆ ಸೇರಿ
ನಾಮಸ್ಮರಣೆಯ ಪುಣ್ಯ ಫಲವನು ಜಗಕೆ ಪಸರಿಸುವ ಎಲ್ಲ ಕೂಡಿ (ಪ) 
ಯುಧಿಷ್ಠಿರನು ಕೇಳಿದ ನಾಮ ಭೀಷ್ಮ ಪಿತಾಮಹ ಹೇಳಿದ ನಾಮ 
ಭವಬಂಧನವ ಕಳೆಯುವ ನಾಮ ಮೋಕ್ಷ ಪ್ರಾಪ್ತಿಗೆ ಪೂರಕ ನಾಮ (1)
ವೇದವ್ಯಾಸರಿಂದ ವಿರಚಿತ ಸ್ತೋತ್ರ ಅನುಷ್ಟಪ್ ಛಂದಸ್ಸಿನಲ್ಲಿ ರಚಿಸಿರುವ ಸ್ತೋತ್ರ 
ದೇವಕಿ ಸುತನ ಸ್ತುತಿಸುವ ಸ್ತೋತ್ರ ಮುಕ್ತಿ ಮಾರ್ಗವ ತೋರಿಸುವ ಸ್ತೋತ್ರ (2)
ವಿಷ್ಣುಸಹಸ್ರನಾಮ ಪರಾಯಣ ಶ್ರವಣ ಆತ್ಮ ಅಂತರಾತ್ಮದ ಶುದ್ಧೀಕರಣ
ರಾಮ ನಾಮದ ಸ್ಮರಣ ಮಾಡೋ ಮನ ನೀಡೋ ಮುಖ್ಯಪ್ರಾಣ (3)
ರಚನೆ: ಜ್ಯೋಮೂಕೀ

Wednesday, August 16, 2017

ಬದುಕಿನ ಬಲೆ

ಅಲ್ಲಿಹುದು ನನ್ನ ಮನೆ
ಇಲ್ಲಿಗೆ ಬಂದಿಹೆ ಸುಮ್ಮನೆ llಪll

ಕೈ ಬೀಸಿ ಕರೆಯುತ್ತಿದೆ ಕರುಳ ಸೆಲೆ
ಬರಲಾರೆ ಬಿಟ್ಟು ಈ ಜೀವ ನೆಲೆll೧ll

ಬದುಕೊಂದು ನಲ್ಮೆಯ ಪಯಣ
ಭಾವನೆಗಳು ಅದಕ್ಕಿಹ ತೋರಣ ll೨ll

ಹುಟ್ಟು ಸಾವುಗಳೇ ಬದುಕಿನ ಆದಿ ಅಂತ್ಯ
ಆಗುತಿಹುದು ನವ ಅನುಭವಗಳು ನಿತ್ಯ ll೩ll

ಏಳು ಬೀಳುಗಳಿಲ್ಲದ ಬದುಕು ನೀರಸ
ಅನುಭವಗಳು ತುಂಬುತಿಹುದು ನವರಸ ll೪ll

ಹಾದಿ ತಪ್ಪಸುತಿಹುದು ಕುರುಡು ಕಾಂಚಾಣ
ದಾರಿ ತೋರಿಸೊ ನಮಗೆ ಓ ಮುಖ್ಯಪ್ರಾಣ ll೫ll

                                    ಜ್ಯೋಮೂಕೀ

Saturday, December 10, 2016

ಕವಿತೆ


ಬದುಕೊಂದು ಭಾವಗೀತೆ
ಭಾವನೆಗಳೇ ಬರಹಕೆ ಹಣತೆ
ಮುದದಿಂದ ಅರಳಲಿ ಕವಿತೆ
ಹರುಷದಿ ಸವಿಯಲು ಜನತೆ

ಸ್ವರ ಸಾಹಿತ್ಯದ ಸಮ್ಮಿಲನ
ಭಾವನೆಗಳ ಆಂದೋಲನ
ಕವಿಯ ಪಾಂಡಿತ್ಯದ ಹೂರಣ
ಕವಿತೆಯ ರೂಪದಿ ಅನಾವರಣ

ಹರುಷವಿರಲಿ ವಿರಹವಿರಲಿ
ಧುಮ್ಮಿಕ್ಕುವುದು ಬರಹದಲಿ
ಕವಿ ಕಂಡನು ತನ್ನ ಕಣ್ಣಲಿ
ನಿರೂಪಿಸಿದನು ಲೇಖನಿಯಲಿ

ಜನನ ಮರಣದ ಪಯಣದಿ
ಭಾವನೆಗಳು ಹರಿವುದು ಬರಹದಿ
ಕವನವದು ಆವಿರ್ಭವಿಸಿತು 
ಮುಖ್ಯಪ್ರಾಣನ ನಿನ್ನ ದಯೆ ಇರಲಿ


-ಗುರು

Thursday, September 24, 2015

ಹಣತೆ-ಕವಿತೆ

ಕತ್ತಲ ಮಧ್ಯೆ
ಬೆಳಕಸೂಸಿ
ನಿಂತಿಹುದು
ಹಣತೆ
ಬರಹಗಳ ಮಧ್ಯೆ
ಭಾವನೆಗಳ
ಹರಿಸಿಹುದು
ಕವಿತೆ

Saturday, July 6, 2013

ಸಸ್ಯಸಂಕುಲ

ಸಸ್ಯಸಂಕುಲ 

  ಚಿತ್ರ ಕೃಪೆ : ಅಂತರ್ಜಾಲ 
ಬರಗಾಲದಲ್ಲಿ
ಬಿಸಿಲ ಬೇಗೆಗೆ
ಬಸವಳಿದು ಕುಳಿತೆ
ಒಂಟಿ ಮರದ ಕೆಳಗೆ
  II ೧   II
ಝಳಪಿಸುತಿಹ ಬಿಸಿಲ
ಬೇಗೆಗಳನು ಹೀರಿ
ಅಸರೆಯನು ನೀಡಿತು
ಬಳಲಿ ಬಂದ ನನಗೆ
  II ೨   II
ಚಳಿಗಾಲದಲ್ಲಿ
ಚಳಿಯನ್ನು ತಾಳದೆ
ಉರುವಲಿಗಾಗಿ
ಆ ಮರವ ಕಡಿದೆ
  II ೩   II
ತನ್ನನ್ನೆ ದಹಿಸಿ
ಬಿಸಿಯನ್ನು ಹರಡಿ
ತಂಪನ್ನು ಬಡಿದೋಡಿಸಿ
ರಕ್ಷಣೆಯನೀಡಿತೆನೆಗೆ
  II ೪   II
ಮರಳಿ ಬಂತು ಬರಗಾಲ
ಕಡು ಬಿಸಿಲು ನೆರಳಿಲ್ಲ
ಒಂಟಿಮರವ ಕಡಿದಿಹೆನು
ನಾನೆಲ್ಲಿ ಹೋಗಲಿಂದು
  II ೫  II
ಮರವನ್ನು ಕಡಿದಾಗ
ಎಲ್ಲಿತ್ತು ನನ್ನರಿವು
ಮುಂದಿಹುದು ಬೇಸಗೆಕಾಲ
ಬೇಕೆನಗೆ ನೆರಳಿನಾಸರೆ
  II ೬  II
ಓ ಮನುಜ ಇನ್ನಾದರೂ ತಿಳಿ
ಸಸ್ಯಸಂಕುಲವೇ ನಮ್ಮುಸಿರು
ಮಾಡದಿರು ಅರಣ್ಯನಾಶ
ತಿಳಿಸಿ ಹೇಳೋ ಓ ಮುಖ್ಯಪ್ರಾಣ

  II೭  II 

ಇಂತೀ:  ಜ್ಯೋಮೂಕೀ

Saturday, June 29, 2013

ಸಮಯದ ಪಯಣ

ಸಮಯದ ಪಯಣ 

  ಚಿತ್ರ ಕೃಪೆ : ಅಂತರ್ಜಾಲ 

ಸೂರ್ಯನಿಗೂ ಚಂದ್ರನಿಗೂ
ಎಲ್ಲಿಯ ಕದನ
ಸಂವತ್ಸರಗಳ ಆಗಮನ
ಇದು ಕಾಲನ ನಿಯಮ
  II ೧   II
ಹಗಲಿಗೂ ಇರುಳಿಗೂ
ಎಲ್ಲಿಯ ಮಿಲನ
ದಿನಗಳ ಜನುಮ 
ಇದು ಜಗದ ನಿಯಮ
  II ೨   II
ಸಾಗುತಿದೆ ಗಡಿಯಾರದ
ಮುಳ್ಳಿನ ಪಯಣ
ಭೂಮಿಯ ಭ್ರಮಣ
ಇದು ಸಮಯದ ಚರಣ
  II೩   II
ಚಳಿ ಮಳೆ ಬೇಸಗೆ
ಕಾಲಗಳ ಆಗಮನ
ಕಷ್ಟ ಸುಖಗಳ ಸಮ್ಮಿಲನ
ಇದು ಬದುಕಿನ ಕವನ
  II ೪   II
ಸತ್ಯಕು ಸುಳ್ಳಿಗೂ
ಎಲ್ಲಿಯ ಗೆಳೆತನ
ಕಲಿಯುಗದ ಕಾರಣ
ತಿಳಿಸೋ ಓ ಮುಖ್ಯಪ್ರಾಣ
  II ೫  II 

ಇಂತೀ:  ಜ್ಯೋಮೂಕೀ

Saturday, June 8, 2013

ಕಣ್ಣಿನ ಭಾವ

 ಕಣ್ಣಿನ ಭಾವ 

 ಚಿತ್ರ ಕೃಪೆ : ಸಂಧ್ಯಾ ಗುರುಮೂರ್ತಿ 
ನಿನ್ನ ಕಣ್ಣ ಬಿಂಬದಲ್ಲಿ
ಕಂಡೆ ನಾನು ನನ್ನನು
ನನ್ನ ಹೃದಯ ಭಾವದಲ್ಲಿ
ಕಂಡೆ ನಾನು ನಿನ್ನನು
  II ೧ II
ಕಣ್ಣ ಗೋಲ ಸುತ್ತುತಿರಲು
ನನ್ನ ನಾನು ಮರೆತೆ
ಹೃದಯ ಭಾವ ಮೀಟುತಿರಲು
ಪ್ರಣಯ ಸುಖದಿ ತೇಲಿದೆ
  II ೨ II
ಅಂತರಂಗದ ಕನಸುಗಳು
ಕಣ್ಣುಗಳಲ್ಲಿ ಕಾಣ್ವದು
ಅದಕ್ಕೆ ತಾನೆ ಪೆಳ್ವರು
ಕಣ್ಣು ಮನದ ಬಾಗಿಲು
  II ೩ II
ಭಾವನೆಗಳ ಸಮ್ಮಿಲನ
ಪ್ರೇಮಿಗಳಿಗೆ ರಸದೌತಣ
ಕಣ್ಣು ಕಣ್ಣು ಬೆರೆಯಿತು
ಮನಗಳೆರಡು ನುಲಿಯಿತು
  II ೪ II
ಪ್ರೀತಿ ಪ್ರೇಮ ಪ್ರಣಯ
ಕಣ್ಣು ಹೃದಯಗಳ ಕವನ
ಭಾವನೆಗಳ ಸಮ್ಮಿಲನ
ವಿವರಿಸು ನೀ ಮುಖ್ಯಪ್ರಾಣ
  II ೫  II 

ಇಂತೀ:  ಜ್ಯೋಮೂಕೀ