Thursday, November 22, 2012

ಜೀವನ

ಜೀವನ 

ಚಿತ್ರ ಕೃಪೆ : ಅಂತರ್ಜಾಲ 
ಧರೆಯ  ಬೊಗಸೆಯಿಂದ
ಮಳೆಯ  ಸಿಂಪಡಿಕೆಯಿಂದ

ಬೀಜದೊಳಗೆ ಪವಡಿಸಿರುವ
ಜೀವಾಮೃತವು ಪುಟಿದೆದ್ದು

ಮೊಳಕೆಯೊಡೆದು ಚಿಗುರಿ
ಹೊರಜಗಕೆ ಬಂದಿಹುದು

ಹೊಸ ಹುಟ್ಟು ಹೊಸ ಬಾಳು
ಮುಂದಿಹುದು ಜೀವನ ಜೈತ್ರಯಾತ್ರೆ

ಜೀವ ಸಂಕುಲದ  ಹುಟ್ಟು ಸಾವುಗಳ
ಮಹಿಮೆಯನು ತಿಳಿಸೋ ಓ ಮುಖ್ಯಪ್ರಾಣ
ಇಂತೀ:  ಜ್ಯೋಮೂಕೀ

1 comment:

  1. nimma kavya namavannu tilisuvantavaraagi...

    Chennagi bandide kavithe..

    ReplyDelete