Wednesday, November 21, 2012

ಬದುಕು

ಬದುಕು 

ಚಿತ್ರ ಕೃಪೆ : ಅಂತರ್ಜಾಲ 
ಬರಡು  ಜೀವನವೆಂದು  ಬರಿದೆ  ಭಾವಿಸಬೇಡ
ಮರುಭೂಮಿಯಲ್ಲೂ   ಇಹುದು  ನೀರಚಿಲುಮೆ

ಕಷ್ಟಕಾರ್ಪಣ್ಯಗಳೆಂದು   ಪರಿತಪಿಸಲೇಬೇಡ
ಭವದ ಭ್ರಮಣೆಗಳೆಲ್ಲವೂ  ಭಗವಂತನ  ಮಹಿಮೆ

ಕಳೆದಿರುವ  ನಿನ್ನೆಯೂ, ಬರಲಿರುವ ನಾಳೆಯೂ 
ನಮ್ಮ ಇಂದಿನ  ನೆಮ್ಮದಿಯ ಕಳೆಯದಿರಲಿ

ಬದುಕಿಗೊಂದು ಗುರಿಯಿರಲಿ, ಬಾಳಿಗೊಂದು ಕಳೆಯಿರಲಿ
ಜನುಮ ಜನುಮಕು ಜಗದೊದ್ದಾರನ  ದಯೆಯಿರಲಿ .
ಇಂತೀ:  ಜ್ಯೋಮೂಕೀ 

2 comments:

  1. Iruvashtu dina santoshadindiru ennuva ee kavithe chennagide... :)

    mundavarisi heege.. :) :)

    ReplyDelete